ಕೇಳಲಿಲ್ಲ….

ಕೃಷ್ಣ, ಗೊಮ್ಮಟರ
ಬಗ್ಗೆ ನಮಗಿಲ್ಲ ಬೇಸರ
ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ!
ಇನ್ನೋರ್‍ವ ತ್ಯಾಗದ ಪ್ರತೀಕ
ಇವರೀರ್‍ವರು ಜಗತ್ಪ್ರಸಿದ್ಧ
ಕಲ್ಲಾಗಿದ್ದರೂ ಜೀವಂತ

ಛೇ, ಮರೆತಿದ್ದೆ
ಅವನೇನು ಕಡಿಮೆಯೇ
ಕೋಟಿ ಕೋಟಿ ನುಂಗುವ
ಆ ತಿಮ್ಮಪ್ಪನ ಬಗ್ಗೆಯೂ
ನಮಗಿಲ್ಲ ಬೇಸರ

ಆದರೆ!
ಕೃಷ್ಣನಿಗೇಕೆ ವಜ್ರ ಕಿರೀಟ? ಪೀತಾಂಬರ?
ದಿಗಂಬರನಿಗೇಕೆ ಕ್ಷೀರಾಭಿಷೇಕ, ಮಹಾಮಜ್ಜನ
ತಿಮ್ಮಪ್ಪನಿಗೇಕೆ ವಜ್ರ ಪಾದುಕೆ, ವಜ್ರಕಿರೀಟ?
ಹೇಳಿ!

ಅವರು ಕೇಳುವರೇ?
ಹಾಗೇ ಮಾಡಿ ಹೀಗೆ ಮಾಡಿ ಎಂದು,

ಧೂಳಿನಲ್ಲಿ ಹುಟ್ಟಿ ಬಂದವರ
ಹಸಿವ ನೀಗಿಸುವರೇ ಅವರು
ಹೇಳಿ?
ಸುನಾಮಿ, ಲಾಥೂರಿನಿಂದಾದ
ಘೋರ ದುರಂತವ ತಪ್ಪಿಸುವರೇ?
ಹೇಳಿ?
*****
ಏಪ್ರಿಲ್ ೯ ೨೦೦೬ರ ಸಾಗರ ಮಣ್ಣಿನವಾಸನೆ ಪತ್ರಿಕೆಯಲ್ಲಿ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೨
Next post ಒಂಟಿ ತೆಪ್ಪ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys